ನನಗೆ ಮೇರಿ ಡೀನ ಆಶಾ ಎಂಬ ಕ್ರಿಶ್ಚಿಯನ್ ಸ್ನೇಹಿತೆ ಒಬ್ಬರಿದ್ದರು. ನಾವು Heartland ಎಂಬ ಕಂಪನಿಯಲ್ಲಿ ಮುಂಚೆ ಒಟ್ಟಿಗೆ ಕೆಲಸ ಮಾಡಿದ್ದೆವು.. ಅವರಿಗಿದ್ದ ಕೆಲವೇ ಕೆಲವು ಸ್ನೇಹಿತರಲ್ಲಿ ನಾನು ಒಬ್ಬ. ಅವರಿಗೆ ಮದುವೆ ಆಗಿ ಕೆಲಸ ಬಿಟ್ಟು ಹೋಗಿದ್ದರು.. ಮದುವೆಗೆ ಕರೆದಿದ್ದರೂ ಸಹ, ಚೆನ್ನೈನಲ್ಲಿ ಇದ್ದಿದ್ದರಿಂದ ಹೋಗಲು ಆಗಿರಲಿಲ್ಲ. ನಾನು ಸಹ Zentech ಎಂಬ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡೆ. ನಮ್ಮಿಬ್ಬರ ನಡುವೆ ಅಷ್ಟೊಂದು communication ಇರಲ್ಲಿಲ್ಲ.
ಒಂದು ದಿನ Gmail ನಲ್ಲಿ ಆಶಾ ಮಗುವಿನ ನಾಮಕರಣದ Invitation ಬಂತು.. ಸ್ಥಳ ಬೆಂಗಳೂರಿನ townhall ಬಳಿ ಇರುವ church ನಲ್ಲಿ ಎಂದಿತ್ತು. ಭಾನುವಾರವು ಆಗಿದ್ದರಿಂದ ಸರಿ ಹೋಗೋಣ; ಹಳೆಯ heartland ಸ್ನೇಹಿತರು ಬರಬಹುದು ನೋಡಿದ ಹಾಗಾಗುತ್ತೆ ಎಂದು ಕಾರ್ಯಕ್ರಮಕ್ಕೆ ಹೋಗುವ ಮನಸು ಮಾಡಿದೆ.. ಆದರೆ ಆ ದಿನ ನನ್ನ ಜೀವನದಲ್ಲಿ ಮರೆಯಲಾರದ ದಿನವಾಗುತ್ತದೆಂದು ಎಂದೂ ಭಾವಿಸಿರಲಿಲ್ಲ. ಆಶಾ ಕೂಡ ಫೋನ್ ಮಾಡಿ ಮನೆಯವರೊಂದಿಗೆ ಬರಲೇ ಬೇಕೆಂದು ಒತ್ತಾಯ ಮಾಡಿ ಕರೆದರು.. ಜೊತೆಯಲ್ಲಿ Vegetarian ಊಟ ಎಂದು ಎರಡೆರಡು ಬಾರಿ ಹೇಳಿದರು. ಏಕೆಂದರೆ ಮುಂಚೆ ವೆಜ್ ನಾನ್ ವೆಜ್ ಬಗ್ಗೆ ನಮ್ಮಿಬ್ಬರ ಬಗ್ಗೆ ತುಂಬಾ ವಾಗ್ಯುದ್ಧಗಳಾಗಿದ್ದವು..
ಭಾನುವಾರ ಬಂತು. ಬೆಳಿಗ್ಗೆ ೧೧.೩೦ ಕ್ಕೆ ಸರಿಯಾಗಿ ಅಲ್ಲಿ ಹೋದೆ.. ಹಳೆಯ ಸ್ನೇಹಿತರು ಯಾರೂ ಬಂದಿರಲಿಲ್ಲ.. (ನಂತರ ತಿಳಿಯಿತು. Heartland ನಿಂದ ಕೇವಲ ಇಬ್ಬರ್ರನ್ನು ಮಾತ್ರ ಕರೆದಿದ್ದರೆಂದು). ಎಲ್ಲರಿಗೂ ಶುಭಾಶಯ ತಿಳಿಸಿ, ಗಿಫ್ಟ್ ಕೊಟ್ಟು ನನ್ನ ಜಾಗಕ್ಕೆ ಬಂದು ಕುಳಿತೆ. ಊಟ ೧.೩೦ ಕ್ಕೆ ಎಂದು ಆಮಂತ್ರಣ ಪತ್ರಿಕೆ ಯಲ್ಲಿ ಇದ್ದಿದ್ದರಿಂದ ಅದರ ಬಗ್ಗೆ ಯೋಚನೆ ಮಾಡಲಿಲ್ಲ. ಆದರೆ ಜೊತೆಗೆ ಮಾತನಾಡಲು ಯಾರು ಇಲ್ಲದಿದ್ದರಿಂದ ಹಸಿವು ಕಾಡತೊಡಗಿತು.. ಆಗ ಮೊಬೈಲ್ ಬೇರೆ ಅಷ್ಟೊಂದು ಬಳಕೆಯಲ್ಲಿ ಇರದಿದ್ದರಿಂದ, ಅದನ್ನು ಹಿಡಿದು ಕುಳಿತರೆ ಅಷ್ಟು ಚೆನ್ನಾಗಿ ಕಾಣುವುದಿಲ್ಲವೆಂದು ಸುಮ್ಮನೆ ಕುಳಿತೆ.. ಅಲ್ಲಿ ಯಾರೂ ಪರಿಚಯ ಬೇರೆ ಇರಲಿಲ್ಲ.. ಇಷ್ಟು ಬೇಗ ಬಂದಿದ್ದು ಯಾಕೆಂದು ನನ್ನನ್ನು ನಾನೇ ಬೈದು ಕೊಳ್ಳತೊಡಗಿದೆ. ಅಂತೂ ಇಂತೂ ೧ .೩೦ ಆಯಿತು.. ಬೇಗ ಬೇಗ ಊಟ ಮುಗಿಸಿ ಮನೆಗೆ ಹೋದರಾಯಿತು ಎಂದು ಭಾವಿಸಿ, ಯಾರಾದರು ಊಟಕ್ಕೆ ಹೋಗಿ ಅಂತ ಹೇಳುತ್ತಾರೇನೋ ಎಂದು ಕಾಯತೊಡಗಿದೆ..
ಆಶಾ ಖುದ್ದಾಗಿ ಬಂದು ಊಟ ಮಾಡಿ ಹೋಗಿ ಎಂದು ಹೇಳುತ್ತಿದ್ದಂತೆ.. ಎದ್ದು ಊಟದ ವ್ಯವಸ್ಥೆ ಮಾಡಲಾಗಿದ್ದ ಸ್ಥಳಕ್ಕೆ ನಡೆದೆ. ಚರ್ಚ್ ನ ಹೊರಗಡೆ ಪೆಂಡಾಲ್ ಹಾಕಿ ಊಟಕ್ಕೆ ಕೂರುವ ವ್ಯವಸ್ಥೆ ಮಾಡಲಾಗಿತ್ತು.. ಒಂದು ಹತ್ತು ಜನ ಊಟಕ್ಕೆ ಕುಳಿತ ನಂತರ ನಾನು ಹೋಗಿ ಊಟಕ್ಕೆ ಕುಳಿತೆ.. ನಾನು ಕುಳಿತ saalinalli ಆ ಕಡೆ ಈ ಕಡೆ ಯಾರು ಇರಲಿಲ್ಲ. ಮೂಲತಃ ಸಸ್ಯಾಹಾರಿಯಾಗಿದ್ದ ನಾನು ಅಲ್ಲಿ ನಾನ್ ವೆಜ್ ಇರುತ್ತದೆ ಎಂದು ತಿಳಿದಿರಲ್ಲಿಲ್ಲ. ಊಟಕ್ಕೆ ಕುಳಿತ ಮೇಲೆ ನನಗೆ ಈ ಪ್ರಶ್ನೆ ಕಾಡತೊಡಗಿತು.. ಏನು ಮಾಡುವುದು ಎಂದು ತಿಳಿಯದೆ ಚಡಪಡಿಸುತ್ತಿದ್ದೆ.
ಆಗ ಸರಿಯಾಗಿ ನನ್ನ ಎದುರಿನ ಟೇಬಲ್ನಲ್ಲಿ ಆ ಚರ್ಚ್ನ ಪಾದ್ರಿ (ಫಾದರ್) ಬಂದು ಕುಳಿತರು.. ಆಗ ನನ್ನ ಮನಸ್ಸಿಗೆ ಸ್ವಲ್ಪ ನೆಮ್ಮದಿ ಎನಿಸಿತು. ಫಾದರ್ ಹೇಗೂ ನಾನ್ ವೆಜ್ ತಿನ್ನಲ್ಲ ಅದ್ದರಿಂದ ನಾನು ಸರಿಯಾದ ಜಾಗದಲ್ಲಿ ಕುಳಿತ್ತಿದ್ದೇನೆಂದು ನನ್ನ ಬೆನ್ನು ನಾನೇ ತಟ್ಟಿಕೊಂಡೆ.
ಅವರು ಕುಳಿತಿರುವ ಸಾಲಿನಲ್ಲೇ ಹೋಗಿ ಕುಳಿತು ಕೊಳ್ಳಲೆ ಎಂದು ಯೋಚಿಸಿದೆ. ಆದರು ಕುಳಿತ್ತಿದ್ದ ಜಾಗ ಬಿಟ್ಟು ಬೇರೆ ಕಡೆ ಹೋಗುವುದು ಸರಿ ಬರುವುದಿಲ್ಲ ಎಂದು ತಿಳಿದು ಅಲ್ಲಿಯೇ ಇದ್ದೆ. ಸುಮಾರಾಗಿ ಶಾಮಿಯಾನ ತುಂಬುತ್ತಿದ್ದಂತೆ ಬಡಿಸಲು ಶುರುವಿಟ್ಟುಕೊಂಡರು. ಉಪ್ಪು, ಉಪ್ಪಿನಕಾಯಿ, ಸ್ವೀಟ್ ಎಲ್ಲ ಬಂತು.. ಇದೆಲ್ಲ ನೋಡುತ್ತಿದ್ದಂತೆ ನನ್ನ ಹಸಿವು ತಾರಕಕ್ಕೇರಿತು. ನಂತರ ಪಲಾವ್, ಗೋಬಿ ಮಂಚೂರಿಯನ್ನು ಬಡಿಸಿದರು. ಕೆಲವರು ತಿನ್ನಲು ಶುರು ಮಾಡಿದರು.. ಸರಿ ನಾನು ಫಾದರ್ ನನ್ನೇ ನೋಡುತಿದ್ದೆ. ಅವರು ತಿನ್ನಲು ಪ್ರಾರಂಭಿಸುತ್ತಿದ್ದಂತೆ ನಾನು ಸಹ ಊಟ ಮಾಡಲು ಅಣಿಯಾದೆ.
ಅಸ್ತು ಹೊತಿಗೆ ಸರಿಯಾಗಿ ಫಾದರ್ ಪಕ್ಕ ಕುಳಿತ ಒಬ್ಬರು ಬಡಿಸುವಾತನಿಗೆ ಹೇಳಿದರು; "ಫಾದರ್ ಗೆ ಬಿರಿಯಾನಿನಲ್ಲಿ ಚಿಕನ್ ಜಾಸ್ತಿ ಹಾಕಪ್ಪ" ಎಂದು.. ಹಾಗೆ ಹೇಳಿದಾಗಲೇ ನನಗೆ ಗೊತ್ತಾಗಿದ್ದು ಅದು ಪಲಾವ್, ಗೋಬಿ ಮಂಚೂರಿ ಅಲ್ಲ, ಚಿಕನ್ ಬಿರಿಯಾನಿ ಮತ್ತು ಚಿಕನ್ ಮನ್ಚುರಿಯನ್ ಎಂದು. ನಂಗೆ ವಿದ್ಯುತ್ ಶಾಕ್ ಹೊಡೆದಂತ ಅನುಭವ. ನನ್ನ ಮನಸಿನಲ್ಲಿ ನೂರಾರು ಪ್ರಶ್ನೆಗಳು.. "ಫಾದರ್ ನಾನ್ ವೆಜ್ ತಿಂತಾರ?" "ಅಹಿಂಸೆ ಬಗ್ಗೆ ಪ್ರತಿಪಾದಿಸುವ ದೇವರ ಸೇವಕರು ಇವರು.. ಇದನ್ನು ತಡೆಯುವ ಬದಲು ಅವರೇ ಇದರಲ್ಲಿ ಭಾಗಿಯಾಗುತ್ತಿದ್ದಾರ?" "ಇಲ್ಲಿಂದ ನಾನು ಹೊರ ಹೋಗುವುದಾದರೂ ಹೇಗೆ?".. "೨ ಕ್ಷಣ ತಡವಾಗಿದ್ದರೆ ತಿಂದು ಬಿಡುತ್ತಿದ್ದೆನಲ್ಲ" ಹೀಗೆ ನಾನಾ ಯೋಚನೆಗಳು.. ಫಾದರ್ ನ ನಂಬಿ ಇಲ್ಲಿ ಕುಳಿತು ತಪ್ಪು ಮಾಡಿದೆ ಎನ್ನಿಸಿತು.. ಫಾದರ್ ನನಗೆ ಗಾಡ್ ಫಾದರ್ ರೀತಿ ಕಾಣಿಸತೊಡಗಿದರು.
ಇಲ್ಲಿಂದ ತಪ್ಪಿಸಿ ಕೊಂಡು ಹೋಗುವ ಬಗೆ ಹೇಗೆ ಎಂದು ಯೋಚಿಸತೊಡಗಿದೆ.. ಆಗ ಸಹಾಯಕ್ಕೆ ಬಂತು ಮೊಬೈಲ್. ಸುಮ್ಮನೆ ಕಾಲ್ ಬಂದವರಂತೆ ನಟಿಸುತ್ತ, ಯಾರ ಬಳಿಯೋ ಮಾತಾಡುತ್ತಿರುವಂತೆ ಶಾಮಿಯಾನದ ಹೊರಗೆ ಬಂದೆ. ಮೊಬೈಲ್ಗೆ ಮನಸಿನಲ್ಲೇ ಥ್ಯಾಂಕ್ಸ್ ಹೇಳುತ್ತಾ ಈ ಅನುಭವದಿಂದಲೇ ಹೊಟ್ಟೆ ತುಂಬಿಸಿಕೊಂಡು ಇಲ್ಲಿ ಊಟವೇ ಬೇಡ ಅಂದುಕೊಂಡು ಹೊರ ನಡೆಯುವಾಗ, ಅಲ್ಲೇ ಶಾಮಿಯಾನದ ಹಿಂಭಾಗದಲ್ಲಿದ್ದ ವೆಜ್ ಊಟದ ಸಾಲು ನನ್ನನ್ನು ಅಣಕಿಸುತ್ತಿತ್ತು.