Thursday, February 17, 2011

ಅಂತಿಮ ಯಾತ್ರೆ

ಅರ್ಧ ಜಗತನ್ನೇ ತನ್ನ ಮುಷ್ಟಿಯಲ್ಲಿ ಇಟ್ಟುಕೊಂಡಿದ್ದ ಅಲೆಕ್ಸಾ೦ಡರ ತನ್ನ ಅಂತಿಮ ದಿನಗಳನ್ನು ಎಣಿಸುತ್ತಿದ್ದ. ಓಡಾಡಲು ಶಕ್ತಿಯಿಲ್ಲದೆ, ಎಲ್ಲ ಕೆಲಸಗಳಿಗೂ ತನ್ನ ವೈದ್ಯ ರನ್ನೇ ಅವಲಂಬಿಸಿದ್ದ.
ಇನ್ನು ಹೆಚ್ಚು ದಿನ ಬದುಕಲಾರೆ ಎಂದು ತಿಳಿದು ತನ್ನ ಉಯಿಲನ್ನು ಬರೆಯಲು ನಿರ್ಧರಿಸಿದ..ನ್ಯಾಯಪ್ರಭುಗಳಿಗೆ ಬರ ಹೇಳಿ ಉಯಿಲನ್ನು ಸಿದ್ಧ ಪಡಿಸಲು ಹೇಳಿದ.. ಕೇವಲ ೩ ಸಾಲಿನ ಉಯಿಲಾಗಿತ್ತು ಅದು.. 
೧. ತನ್ನ ಶವಪೆಟ್ಟಿಗೆ ಯನ್ನು ತನ್ನ ೪ ಜನ ವೈದ್ಯರೇ ಹೊರಬೇಕು.
೨. ತನ್ನ ಶವಯಾತ್ರೆ ನಡೆಯುವ ದಾರಿಯೆಲ್ಲ ತಾನು ಇತರ ದೇಶಗಳಿಂದ ಕೊಳ್ಳೆ ಹೊಡೆದ ಮುತ್ತು ರತ್ನ ವಜ್ರ ವೈಡೂರ್ಯ ಗಳಿಂದ ಚೆಲ್ಲಾಡಿರಬೇಕು.
೩. ತನ್ನ ಬಲಗೈ ಅಂಗೈ ಯನ್ನು ಆಕಾಶಕ್ಕೆ ಅಭಿಮುಖವಾಗಿ ಶವದ ಪೆಟ್ಟಿಗೆ ಯಿಂದ ಹೊರಗೆ ಚಾಚಿರಬೇಕು.

ಹೀಗೆ ಬರೆಸಿದ ಉಯಿಲನ್ನು ಎಲ್ಲರೆದುರು ಓದಿ ಸಹಿ ಮಾಡಿ ಅಂಗೀಕೃತಗೊಳಿಸಿದ.

ರಾಜವೈದ್ಯರಿಗೆಲ್ಲ ಆಶ್ಚರ್ಯ ಈ ಥರದ ವಿಚಿತ್ರ ಉಯಿಲನ್ನು ನೋಡಿ.. ಆದರೆ ಯಾರಿಗೂ ಧೈರ್ಯ ಬರಲಿಲ್ಲ ಚಕ್ರವರ್ತಿಯನ್ನು ಪ್ರಶ್ನಿಸಲು.. 

ಕೊನೆಗೂ ರಾಜನಿಗೆ ಆಪ್ತನಾದ ಒಬ್ಬ ರಾಜವೈದ್ಯ ಕೇಳಿಯೇಬಿಟ್ಟ. "ಪ್ರಭು ನಿಮ್ಮನ್ನು ಪ್ರಶ್ನಿಸುತ್ತಿರುವ ಉದ್ಧಟತನಕ್ಕೆ ಕ್ಷಮಿಸಬೇಕು.. ನಿಮ್ಮ ಉಯಿಲಿನ ಗೂಡಾರ್ಥವನ್ನು ವಿವರಿಸಬೇಕಾಗಿ ವಿನಂತಿ."

ನಗುತ್ತಾ ಅಲೆಕ್ಸಾ೦ಡರ ನುಡಿದ.. 
"ಇದರಲ್ಲಿ ಗೂಡಾರ್ಥವೇನು ಇಲ್ಲ. ಇದು ಜಗತಿಗ್ಗೆ ನನ್ನ ಅನುಭವವನ್ನು ಹೇಳುವ ಪರಿ.. 
೧. ತನ್ನ ಶವಪೆಟ್ಟಿಗೆ ಯನ್ನು ತನ್ನ ೪ ಜನ ವೈದ್ಯರೇ ಹೊರಬೇಕು - ಯಾವ ವೈದ್ಯನೂ ನಿಮ್ಮನ್ನು ಸಾವಿನಿಂದ ರಕ್ಷಿಸಲಾರ. ಒಂದಲ್ಲ ಒಂದು ದಿನ ಎಲ್ಲರೂ ಹೋಗಲೇಬೇಕು.. 
೨. ತನ್ನ ಶವಯಾತ್ರೆ ನಡೆಯುವ ದಾರಿಯೆಲ್ಲ ತಾನು ಇತರ ದೇಶಗಳಿಂದ ಕೊಳ್ಳೆ ಹೊಡೆದ ಮುತ್ತು ರತ್ನ ವಜ್ರ ವೈಡೂರ್ಯ ಗಳಿಂದ ಚೆಲ್ಲಾಡಿರಬೇಕು. - ಸಂಪಾದಿಸಿದ ಐಶ್ವರ್ಯವೂ ನಿಮ್ಮನ್ನು ಸಾವಿನಿಂದ ಕಾಪಡಲಾರದು.
೩. ತನ್ನ ಬಲಗೈ ಅಂಗೈ ಯನ್ನು ಆಕಾಶಕ್ಕೆ ಅಭಿಮುಖವಾಗಿ ಶವದ ಪೆಟ್ಟಿಗೆ ಯಿಂದ ಹೊರಗೆ ಚಾಚಿರಬೇಕು. - ಇಷ್ಟೆಲ್ಲಾ ದೇಶಗಳನ್ನು ಕೊಳ್ಳೆ ಹೊಡೆದಿದ್ದರೂ, ಇಷ್ಟೆಲ್ಲಾ ಸಂಪತ್ತು ಹೊಂದಿದದ್ದರು ಕೊನೆಗೆ ಮಣ್ಣಾಗುವ ಸಮಯದಲ್ಲಿ ಅಲೆಕ್ಸಾ೦ಡರನೂ ಖಾಲಿ ಕೈನಲ್ಲೇ ಸಾಯಬೇಕಾಯಿತು ಎಂದು ಲೋಕಕ್ಕೆ ತಿಳಿಯಲಿ ಎಂದು ಹೀಗೆ ಬರೆಸಿರುವುದಾಗಿ ಹೇಳಿ ತನ್ನ ಕೊನೆ ಉಸಿರನ್ನು ಎಳೆದನು ಅಲೆಕ್ಸಾ೦ಡರ ಚಕ್ರವರ್ತಿ.. 

ಕೊಡುವುದರಲ್ಲಿ ಇರುವ ಸುಖ ತೆಗೆದುಕೊಳ್ಳುವುದರಲ್ಲಿ ಇರುವುದಿಲ್ಲ..ಇದುವರೆಗೂ ಇತಿಹಾಸದಲ್ಲಿ ಪ್ರಖ್ಯಾತರಾಗಿರುವ ಎಲ್ಲ ಮಹನೀಯರು ತಾವು ಮಾಡಿದ ಕೊಡುವಿಕೆ ಯಿಂದಲೇ ಪ್ರಸಿದ್ಧರಾಗಿದ್ದಾರೆ.. ಅದು ಹಣ ಆಗಿರಬಹುದು, ಜ್ಞಾನ ಆಗಿರಬಹುದು, ವಿದ್ಯೆ ಆಗಿರಬಹುದು, ತಮ್ಮ ಕುಶಲತೆ ಆಗಿರಬಹುದು ಅಥವ ಏನೆ ಆಗಿರಬಹುದು.. ಇರುವ ಕೆಲವೇ ವರ್ಷಗಳಲ್ಲಿ ಎಲ್ಲರನ್ನು ಖುಷಿಯಾಗಿಡುವ ಸಣ್ಣ ಪ್ರಯತ್ನ ನಿಮ್ಮದಾಗಲಿ.. ಅದೇ ನೀವು ಮಾಡಿ ಹೋಗುವ ದೊಡ್ಡ ಆಸ್ತಿ..

 

3 comments:

Prashanth said...

ಉತ್ತಮ ಬರವಣಿಗೆ, ರಾಜು :o)

Anonymous said...

thumba chennagi bardidira Guru avare, kushi aythu vodi.
ofcourse naanu nimma comment nodi nimma blog nodiddu..neevu kannada dalli bariyuva shyli nodi thumba kushi aythu.. nangu kannadalli baribeku antha aase.. :)

ಗುರುರಾಜ said...

ಧನ್ಯವಾದಗಳು ಮಾಯ.. ನಿಮ್ಮ ಕನ್ನಡ ಅಭಿಮಾನ ಕಂಡು ಸಂತೋಷವಾಯಿತು. ಬ್ಲಾಗ್ ಗೆ ಭೇಟಿ ಕೊಟ್ಟಿದ್ದಕ್ಕೆ ಧನ್ಯವಾದಗಳು. ನೀವು ಕನ್ನಡದಲ್ಲಿ ಸುಲಭವಾಗಿ ಬ್ಲಾಗ್ ಮಾಡಬೇಕೆಂದರೆ ಈ ಲಿಂಕ್ ನಲ್ಲಿರುವ ಲೇಖನ ಓದಿ.
http://pacchiee.blogspot.com/2010/05/blog-post_23.html